Prajapath

ಮುಖ್ಯಾಂಶಗಳು

ಬಿಡಾಡಿ ದನಗಳಿಗೆ ಬಲಿಯಾದ ವೃದ್ಧ-ನಿರ್ಲಕ್ಷ್ಯ ತೋರಿದ್ದ ನಗರಸಭೆ ವಿರುದ್ಧ ಸ್ಥಳಿಯರ ಆಕ್ರೋಶ

Spread the love
  • ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ, 70 ವರ್ಷದ ಶಂಕರಪ್ಪ ಹೊಳಿ ಸಾವು
  • ಸಮಯಕ್ಕೆ ಸರಿಯಾಗಿ ಬಾರದ ಅಂಬ್ಯೂಲೆನ್ಸ್ ವಿರುದ್ಧವೂ ಆಕ್ರೋಶ

 

ಪ್ರಜಾಪಥ ವಾರ್ತೆ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಳವಾಗಿರುವ ಬಿಡಾಡಿ ದನಗಳ ಉಪಟಳಕ್ಕೆ  ವೃದ್ಧನೋರ್ವ ಸಾವನ್ನಪ್ಪಿರುವ  ಘಟನೆ ಬುಧವಾರ ಬೆಳಿಗ್ಗೆ ಬೆಟಗೇರಿಯಲ್ಲಿ ನಡೆದಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ, 70 ವರ್ಷದ ಶಂಕರಪ್ಪ ಹೊಳಿ ಸಾವನ್ನಪ್ಪಿದ ದುರ್ದೈವಿ.

ಘಟನೆ ವಿವರ: ಬೆಟಗೇರಿಯ ಸರಕಾರಿ ಪ್ರಾಥಮಿಕ ಶಾಲೆ ನಂಬರ್ 7ರ ಹತ್ತಿದ ಬಿಡಾಡಿ ಗೂಳಿ ಇತರೆ ದನಗಳೊಂದಿಗೆ ಗುದ್ದಾಡುತ್ತಿರುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ರಭಸವಾಗಿ ಗುದ್ದಿದೆ. ಪರಿಣಾಮ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಸುತ್ತಿದ್ದರೂ ಸ್ಥಳೀಯ ನಗರಾಡಳಿತ ನಿರ್ಲಕ್ಷಿಸುತ್ತಲೇ ಬಂದಿದೆ ಎಂಬುದು ಘಟನೆ ಬಳಿಕ ಪ್ರತಿಭಟನೆಗಿಳಿದಿದ್ದ ನಗರಸಭೆ ಮಾಜಿ ಸದಸ್ಯ ದಶರಥರಾಜ ಕೊಳ್ಳಿ ಆರೋಪ.

ಎಚ್ಚೆತ್ತುಕೊಳ್ಳದ ನಗರಸಭೆ ನಿರ್ಲಕ್ಷ್ಯದಿಂದ ವೃದ್ಧನೊಬ್ಬ ಸಾವಿಗೀಡಾಗುವಂತಾಗಿದೆ ಎಂದೂ ಕಿಡಿಕಾರಿದರು.

ಈ ಕುರಿತು ಬೆಟಗೇರಿ ಪಿಎಸ್ಐ ಲಕ್ಷ್ಮಣ ಆರಿ ಮಾತನಾಡಿ, ಈಗಾಗಲೇ ನಗರಸಭೆಗೆ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪತ್ರ ಬರೆಯಲಾಗಿತ್ತು. ಈಗ ಮತ್ತೆ ನಗರಸಭೆಗೆ ಬಿಡಾಡಿ ದನಗಳ ಸ್ಥಳಾಂತರ ಮಾಡುವಂತೆ ಸೂಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!