ತಂದೆಯನ್ನೇ ಕೊಂದು ಹಾಕಿದ ಮಗ!
ಗದಗ ತಾಲ್ಲೂಕಿನ ಹುಲಕೋಟಿಯಲ್ಲಿ ಘಟನೆ- ಆರೋಪಿ ಪೊಲೀಸರಿಗೆ ಶರಣು
ಪ್ರಜಾಪಥ ವಾರ್ತೆ
ಗದಗ: ಕೌಟುಂಬಿಕ ಕಲಹದಿಂದ ಹೆತ್ತ ತಂದೆಯನ್ನು ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
ಗಣೇಶ್ ಚಿಕ್ಕನಟ್ಟಿ (58) ಮೃತ ವ್ಯಕ್ತಿ. ತಂದೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ವಿಜಯ್ (24) ಪೊಲೀಸರಿಗೆ ಶರಣಾಗಿದ್ದಾನೆ.
‘ಮೃತ ಗಣೇಶ್ ಚಿಕ್ಕನಟ್ಟಿ ಪ್ರತಿದಿನ ಬೆಳಿಗ್ಗೆ ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಇದರಿಂದ ಮನೆಯಲ್ಲಿ ದಿನಂಪ್ರತಿ ಜಗಳ ನಡೆಯುತ್ತಿತ್ತು. ಅವರ ಇಬ್ಬರು ಮಕ್ಕಳು ಕೂಡ ಮನೆ ಬಿಟ್ಟು ಹೋಗಿದ್ದರು. ಕುಡಿದು ಗಲಾಟೆ ಮಾಡುವುದರ ಜತೆಗೆ ಮನೆಯ ವಾಸ್ತು ಸರಿ ಇಲ್ಲ; ಮನೆ ಒಡೆದು ಹಾಕುವೆ ಎಂದು ಹೇಳುತ್ತಿದ್ದರು. ಬುಧವಾರ ನಡೆದ ಜಗಳದಲ್ಲಿ ವಿಜಯ್ ತಂದೆಯನ್ನು ಹತ್ಯೆ ಮಾಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.