Prajapath

ಮುಖ್ಯಾಂಶಗಳು

ಕಾಂಗ್ರೆಸ್ ಮುಖಂಡ, ಹುಯಿಲಗೋಳ ಗ್ರಾಪಂ ಮಾಜಿ ಸದಸ್ಯ ಅಶೋಕ ಬೆಳಗಟ್ಟಿ ಜಿನೈಕ್ಯ (ವಿಧಿವಶ)

Spread the love

 

ಪ್ರಜಾಪಥ ವಾರ್ತೆ

ಗದಗ: ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ, ಜೈನ ಸಮಾಜದ ಹಿರಿಯರು, ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿದ್ದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಅಶೋಕ ಜಿನ್ನಪ್ಪ ಬೆಳಗಟ್ಟಿ (70) ಇಂದು ಬೆಳಗಿನ ಜಾವ ಜಿನೈಕ್ಯ (ವಿಧಿವಶ)ರಾಗಿದ್ದಾರೆ.

ಧರ್ಮಪತ್ನಿ, ಮೂವರು ಪುತ್ರರು ಸೇರಿ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಹುಯಿಲಗೋಳದಲ್ಲಿ ನಡೆಯಲಿದೆ.

ಸಂತಾಪ: ಮೃತರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಹುಯಿಲಗೋಳ ಗ್ರಾಪಂ ಅಧ್ಯಕ್ಷ ಟಿಪ್ಪುಸುಲ್ತಾನ ನದಾಫ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!